ನನ್ನ ಸಂಕಟಗಳನ್ನು ನೀಗಿಸಿ ನನ್ನನ್ನು ಶರಣನನ್ನಾಗಿ ಸ್ವೀಕರಿಸಿ,
ನನ್ನ ಅಂತರಂಗದಲ್ಲಿರುವ ಮುಗ್ಧತೆಯಿಂದುಂಟಾದ
ಅಹಮ್ಮಿಕೆಯನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸುವುದರಿಂದ
ಹೊರಸೂಸಿ ಪ್ರಜ್ವಲಿಸುವ ಪರಿಶುದ್ಧವಾದ ಸೌಂದರ್ಯ
ಜ್ಯೋತಿಯಂತಹ ಆತ್ಮಜ್ಞಾನದಲ್ಲಿ ಪ್ರಾಜ್ವಲ್ಯಮಾನನಾಗಿ
ದರ್ಶನವನ್ನು ತೋರುವ ಪರಂಜ್ಯೋತಿಯೇ! ಶತ್ರುಗಳನ್ನು
ಸಂಹರಿಸುವ, ಬಸವನನ್ನು ವಾಹನವನ್ನಾಗಿಯುಳ್ಳವನೆ!
ಪೊನ್ನಂಬಲವೆಂಬ ಸ್ವರ್ಣಾಲಯದಲ್ಲಿ ನೃತ್ಯವನ್ನು ಪ್ರದರ್ಶಿಸುವವನೆ!
ಬ್ರಹ್ಮನೂ, ವಿಷ್ಣುವೂ ನಿನ್ನ ನಿಜಸ್ವರೂಪವನ್ನು ಅರಿಯದಂತೆ
ಸರ್ವವ್ಯಾಪಿಯಾಗಿ ಬೆಳಕನ್ನು ಹರಡಿ ಸರ್ವಾಂತರ್ಯಾಮಿಯಾಗಿರುವ
ನಿನ್ನನ್ನು ನಿನ್ನ ಕಿಂಕರನಾದ ನಾನು ಪೂಜಿಸುವಂತೆ ನೀನು ಪವಿತ್ರವಾದ
ಮನಸ್ಸಿನಿಂದ ನನಗೆ ಕೃಪೆತೋರುವವನಾಗು.
ಕನ್ನಡಾನುವಾದ : ಕೆ. ಮಲರ್ ವಿಳಿ, 2010