ವಯಸ್ಸಿನಿಂದ ಮುದಿಯಾದ, ಬಲಿಷ್ಠವಾದ ಆಮೆಯ ಚಿಪ್ಪನ್ನೂ,
ಎಳೆಯದಾದ ನಾಗರ ಹಾವನ್ನೂ, ಹಂದಿಯ ಕೋರೆ ದಾಡೆಯಂತಹ
ಹಲ್ಲುಗಳನ್ನೂ ಪೋಣಿಸಿ ಮಾಲೆಯಾಗಿ ಅಲಂಕರಿಸಿಕೊಂಡು,
ಮಾಂಸವೆಲ್ಲವೂ ಒಣಗಿ ಹೋದಂತಹ ಬ್ರಹ್ಮ ಕಪಾಲದಲ್ಲಿ ಉಣಿಸನ್ನು
ಯಾಚಿಸಿ, ಬಂದು ನನ್ನ ಮನಸ್ಸನ್ನು ಕದ್ದ ಕಳ್ಳ, ಶಾಸ್ತ್ರಾಧ್ಯಯನ
ಮತ್ತು ತರ್ಕದಲ್ಲಿ ಘನತೆವೆತ್ತ ಹಿರಿಯರಾದವರು ತನ್ನ ದಿವ್ಯ ಪಾದಗಳನ್ನು
ಅವರ ಕೈಗಳಲ್ಲಿ ಸೇವಿಸಿ ಪೂಜಿಸಲು, ಅವರುಗಳಿಗೆ ಕೃಪೆಗೈವ ನೆಲೆಯಲ್ಲಿ
ವೃಷಭ ವಾಹನನಾಗಿ ದರ್ಶನವೀಯುವ ಬ್ರಹ್ಮಪುರದಲ್ಲಿ ಬೆಳಗುವಂತಹ
ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010