ವಿಷ್ಣುವೂ, ಕಮಲದ ಹೂವಿನ ಮೇಲೆ ಕುಳಿತಿರುವ
ನಾಲ್ಮೊಗನಾದ ಬ್ರಹ್ಮನೂ, ತನ್ನ ಪಾದಗಳನ್ನೂ,
ತಲೆಯ ಮುಡಿಯನ್ನೂ ಕೂಡಲೇ ಕಾಣುವ ಸಲುವಾಗಿ
ಹಂದಿಯಾಗಿಯೂ, ಹಂಸವಾಗಿಯೂ ಹುಡುಕುತ್ತಾ ಹೊರಡಲು
ಅಣ್ಣಾಮಲೆಯಾಗಿ ಬೆಳೆದು ನಿಂತು, ನನ್ನ ಮನಸ್ಸನ್ನು ಕದ್ದ
ಕಳ್ಳನಾಗಿ ಬೆಳಗುವಂತಹ, ಜ್ವಲಿಸುವಂತಹ ನೊಸಲನ್ನೂ,
ಕೆಂಬಣ್ಣವನ್ನೂ ಹೊಂದಿರುವ, ಜನರೇ ಆದಿಯಾಗಿ, ಲೋಕದ
ಎಲ್ಲರೂ ಸ್ತುತಿಸಬಯಸುವಂತೆ ಮಾಡುವ, ಬ್ರಹ್ಮಪುರದಲ್ಲಿ
ವಾಸ ಮಾಡುವ ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010