ಶಬ್ದರೂಪವಾದ ವೇದವನ್ನು ಹಾಡುತ್ತಲೂ, ಆಡುತ್ತಲೂ,
ಗಂಡು ಗೊಡಲಿಯನ್ನು ಕೈಯಲ್ಲಿ ಹಿಡಿದೆತ್ತಿಕೊಂಡು ಬಂದು,
ನನ್ನ ಮುಂಗೈಯಲ್ಲಿರುವ ಒತ್ತೊತ್ತಾಗಿರುವ ಬೆಳ್ಳಗಿರುವಂತಹ
ಬಳೆಗಳು ಕಳಚಿ ಬೀಳುವಂತೆ ನನ್ನನ್ನು ಕೃಶವಾಗಿಸಿ ನನ್ನ
ಮನಸ್ಸನ್ನು ಕದ್ದ ಕಳ್ಳ, ಕತ್ತಲು ಕಳೆದ, ಪರಿಮಳ ತುಂಬಿದ
ತೋಪುಗಳಲ್ಲಿ ಎತ್ತರೆತ್ತರಕ್ಕೆ ಬೆಳೆದ ಮರಗಳು ಇರುವಂತಹ
ಕಾಡುಗಳಲ್ಲಿ ಬೆಳದಿಂಗಳನ್ನು ಹರಡುವ ಬಾಲಚಂದ್ರನನ್ನು
ಮುಡಿದವನಾಗಿ ಬ್ರಹ್ಮಪುರದಲ್ಲಿ ವಾಸಗೈಯುತ್ತಿರುವ
ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010