ಪುಣ್ಯವಿಲ್ಲದಂತಹ ಬೌದ್ಧರೂ, ಅರಿವಿಲ್ಲದ ಶ್ರಮಣರೂ,
ಶೈವ ಧರ್ಮದ ಬಗ್ಗೆ ಹಿಂದಿನಿಂದ ದೂರಲು, ಅದು ಜ್ಞಾನಿಗಳು
ರೂಢಿಸಿದ ಮಾರ್ಗದಲ್ಲಿ ನಿಲ್ಲದೆ ಇರುವುದರಿಂದ, ತಮಗೆ
ಹೊಂದಿಕೊಳ್ಳುವಂತೆ ತೋರುವ ದೋಷ ಪೂರ್ಣವಾದ
ಅಭಿಪ್ರಾಯಗಳನ್ನು ಉಪದೇಶಿಸುತ್ತಾ ಅಲೆದಾಡುತ್ತಿರಲು,
ಲೋಕಗಳೆಲ್ಲವನ್ನೂ ಸುತ್ತುತ್ತಾ ಭಿಕ್ಷಾಟನೆ ಮಾಡುವ
ನನ್ನ ಮನಸ್ಸನ್ನು ಕದ್ದ ಕಳ್ಳ, ಮದ್ದಾನೆಯನ್ನು
ಭ್ರಮಿಸುವಂತೆ ಮಾಡಿ, ಅದನ್ನು ಕೊಂದು,
ಅದರ ಚರ್ಮವನ್ನು ಸುಲಿದು, ಮೈಮೇಲೆ ಹೊದ್ದುಕೊಂಡು
ಅದು ತನಗೊಂದು ಲೀಲಾಜಾಲವಾದ ಮಾಯಾ ಕೃತ್ಯವೋ
ಎಂಬುವಂತೆ ಮಾಡಿ, ಉನ್ಮತ್ತನಾಗಿ ಬೆಳಗುವ ಬ್ರಹ್ಮಪುರದಲ್ಲಿ
ವಾಸಗೈವ ಭಗವಂತನಾಗಿರುವವನು ಇವನೇ ಅಲ್ಲವೇನು!
ಕನ್ನಡಾನುವಾದ : ಬಿಂಡಿಗನವಿಲೆ ನಾರಾಯಣಸ್ವಾಮಿ, 2010